ಸಂಪಾದಕೀಯ
ಸಂಪಾದಕೀಯ
"ಇಂಡಿಯನ್ಸ್ ನಂ. ೧" ಎನ್ನುವುದು ಶಿಕ್ಷಾರ್ಹ ಅಪರಾಧವೇ?!
ಅರೆ ನಗ್ನ ಸಲ್ಮಾನ್ ಖಾನ್ ಕುಣಿದು ಕುಪ್ಪಳಿಸುತ್ತಾ "ಈಸ್ಟ್ ಆರ್ ವೆಸ್ಟ್, ಇಂಡಿಯಾ ಈಸ್ ದ ಬೆಸ್ಟ್" ಎಂದರೆ ತಪ್ಪಲ್ಲ; ತಪ್ಪಲ್ಲ ಮಾತ್ರವಲ್ಲಾ, ಅದು ಹೆಚ್ಚುಗಾರಿಕೆ; ಹಣದ ಹೊಳೆಯೇ ಹರಿಸುವ ಹೆಚ್ಚುಗಾರಿಕೆ. ಆದರೆ, ಹೈಸ್ಕೂಲಿನ ಹುಡುಗಿಯರು "Indians No. 1" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಮಾತ್ರ ಶಿಕ್ಷಾರ್ಹ ಅಪರಾಧ! ಮುಂದೆ ಓದಿ »
ಮಂಗಗಳೂ ಮನುಷ್ಯರೇ ಅಲ್ಲವೇ?
ಮಜಾವಾಣಿ: ತಮಿಳು ಸಂಚಿಕೆ
ಮಜಾವಾಣಿಗೆ ಪುರಸ್ಕಾರ!
ಬೆಂಗಳೂರು ಫೆಬ್ರುವರಿ ೬, ೨೦೦೬: ಕರ್ನಾಟಕ ಮತ್ತು ತಮಿಳು ನಾಡಿನ ನಡುವಿನ ಕಾವೇರಿ ವಿವಾದದ ನಡುವೆಯೇ, ಕನ್ನಡದ (ಆಗೊಂದು ಈಗೊಂದು) ದಿನಪತ್ರಿಕೆ ಮಜಾವಾಣಿ ಇಡೀ ಒಂದು ಸಂಚಿಕೆಯನ್ನೇ ತಮಿಳು ಲಿಪಿಯಲ್ಲಿ ಪ್ರಕಟಿಸಿ "ತಮಿಳು ಲಿಪಿಯಲ್ಲಿ ಪ್ರಕಟಿಸಿದ ಪ್ರಪ್ರಥಮ ಕನ್ನಡ ಸುದ್ದಿ ಪತ್ರಿಕೆ" ಎಂಬ ಪುರಸ್ಕಾರಕ್ಕೆ ಪಾತ್ರವಾಗಿದೆ.
ಈ ಕುರಿತು ನಮ್ಮ ಪತ್ರಿಕೆಗೆ ಆತ್ಮ-ಸಂದರ್ಶನ ನೀಡಿದ ಮಜಾವಾಣಿ ಸಂಪಾದಕರು, "ಈ ಗೌರವ ನಮ್ಮ ಪತ್ರಿಕೆಗೆ ಮಾತ್ರ ಸಂದ ಗೌರವ ಅಲ್ಲ, ಇಡೀ ಕನ್ನಡ ಪತ್ರಿಕೋದ್ಯಮಕ್ಕೇ ಸಂದ ಗೌರವ. ಇದು ಅತ್ಯಂತ ಹೆಮ್ಮೆಯ ವಿಷಯ. ತಮಿಳಿನಲ್ಲಿ ಕನ್ನಡವೆನೆ ಕುಣಿದಾಡುವುದೆನ್ನೆದೆ, ಕನ್ನಡವೆನೆ ಕಿವಿ ನಿಮಿರುವುದು ಎಂದು ತಮಿಳರಿಗೆ ಶುಭ ಹಾರೈಸಿ, ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದ್ದೇವೆ" ಎಂದರು. "ಅದಲ್ಲದೆ, ಕನ್ನಡ ಪತ್ರಿಕೋದ್ಯಮದ ಹಿರಿಯಕ್ಕನಾಗಿ, ಇಂಗ್ಲೀಷ್ ಸುದ್ದಿಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಾ ಹಾಲು-ಹೆಜ್ಜೆಯನ್ನಿಡುತ್ತಿರುವ ಕನ್ನಡ ಪತ್ರಿಕೋದ್ಯಮ ಹಸುಗೂಸಾದ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಗೆ ಮುಂದಿನ ಹೆಜ್ಜೆಯನ್ನು ತೋರುವ ಜವಬ್ದಾರಿ ಸಹ ನಮ್ಮ ಪತ್ರಿಕೆಯ ಮೇಲಿದೆ" ಎಂದೂ ಸಹ ನುಡಿದರು. ಮುಂದೆ ಓದಿ »
மஜாவாணி: தமிளினல்லி
கன்னடவெனெ குணிதாடுவுதென்னெதெ!
கன்னடவெனெ கிவி னிமிருவுது!! ಮುಂದೆ ಓದಿ »
ಮಜಾವಾಣಿ: ತಿದ್ದುಪುಡಿ
ಪ್ರಜಾವಾಣಿ ತಿದ್ದುಪಡಿ
ಕನ್ನಡದ ಖ್ಯಾತ ಸುದ್ದಿಪತ್ರಿಕೆ ಪ್ರಜಾವಾಣಿ ಶಿಲ್ಪಾ ಶೆಟ್ಟಿಯವರ ರಿಯಾಲಿಟಿ ಷೋ ಕುರಿತು ಒಂದು ಸಂಪಾದಕೀಯವನ್ನು ಪ್ರಕಟಿಸಿತ್ತು. ಮುದ್ರಣ ದೋಷದಿಂದಾಗಿ ಆ ಸಂಪಾದಕೀಯದಲ್ಲಿ ಹಲವಾರು ತಪ್ಪುಗಳಿದ್ದು ಪ್ರಜಾವಾಣಿ ಪತ್ರಿಕೆ ಓದುಗರ ನಗೆಪಾಟಲಿಗೀಡಾಗಿದ್ದಷ್ಟೇ ಅಲ್ಲದೇ ಮರುದಿನ ತಿದ್ದುಪಡಿಯೊಂದನ್ನು ಪ್ರಕಟಿಸಬೇಕಾಯಿತು. ಆದನ್ನು ಯಥಾವತ್ತಾಗಿಡಲಾಗಿದೆ: ಮುಂದೆ ಓದಿ »

